day, 00 month 0000
00:00:00
ಅವಿನ್ ಟಿವಿ ಕೆಂಬತ್ ಮಕ್ಕಿ ( ಕೆಂಬತ್ಮಕ್ಕಿ ) ಮನೋಜ್ ಸಾರಥ್ಯದಲ್ಲಿ Avin Tv In the Leadership Of Kembathmakki Manoj ಜಾನಪದ ಪರಿಷತ್ ಹಾಗೂ ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿಯ ವತಿಯಿಂದ “ಜಾನಪದ ಕಲಾ ರಂಗು” ಕಾರ್ಯಕ್ರಮ #avintvcom – AVIN TV

लाइव कैलेंडर

April 2024
M T W T F S S
1234567
891011121314
15161718192021
22232425262728
2930  

AVIN TV

Latest Online Breaking News

ಜಾನಪದ ಪರಿಷತ್ ಹಾಗೂ ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿಯ ವತಿಯಿಂದ “ಜಾನಪದ ಕಲಾ ರಂಗು” ಕಾರ್ಯಕ್ರಮ #avintvcom

Featured Video Play Icon
post Hospital Stroke care center www.nisargacare.com rehab bedridden care home Nursing Service , Nisarga care Healthcare Rehabilitation Center | Health Care Unit | Pre & Post Operative Care | Home Nursing | Geriatric Care , www.nisargacare.com NISARGA CARE Stroke & Paralysis Rehabilitation Hospital Nisarga Rehab - Centre For Neurological Rehabilitation mentally retarded neuro and Stroke Rehabilitation in Bangalore Best Rehab care www.nisargacare.com http://www.nisargacare.com , http://www.navachaithanyaoldagehome.com , http://www.avintv.com/9211/

“ಜಾನಪದ ಕಲಾ ರಂಗು”

ಕಾರ್ಯಕ್ರಮ.

 

ದಿನಾಂಕ 11.02.2021.ರ ಗುರುವಾರ ಬೆಳಿಗ್ಗೆ.11.ಕ್ಕೆ ಮೂಡಿಗೆರೆ ಪಟ್ಟಣದ ಶಾಸಕರ ಮಾಧರಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ

ತಾಲೂಕು ಕನ್ನಡ ಜಾನಪದ ಪರಿಷತ್ ಹಾಗೂ ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿಯ ವತಿಯಿಂದ  “ಜಾನಪದ ಕಲಾ ರಂಗು” ಕಾರ್ಯಕ್ರಮ ನಡೆಯಿತು.

ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ತಾಲ್ಲೂಕು ಕನ್ನಡ ಜಾನಪದ ಪರಿಷತ್ ನ ಅಧ್ಯಕ್ಷ ಬಕ್ಕಿ ಮಂಜುನಾಥ್ ವಹಿಸಿದ್ದರು. ಕಾರ್ಯಕ್ರಮದ  ಉದ್ಘಾಟನೆಯನ್ನು ಕ್ಷೇತ್ರ ಶಿಕ್ಷಣಾಧಿಕಾರಿ  ಹೇಮಂತ್ ರಾಜ್ ನೆರೆವರಿಸಿದರು. ಅವರು ಮಾತನಾಡುತ್ತ -ನಮ್ಮ ಹಿರಿಯರು ಅವರ ಅನುಭವಗಳನ್ನು ತಮ್ಮ ಒಗಟು ಗಾದೆಗಳ ಮೂಲಕ ಬದುಕು ಕಟ್ಟಿಕೊಟ್ಟಿದ್ದಾರೆ. ಅವರೆಲ್ಲರ ಬದುಕಿನ ಮಾರ್ಗದಲ್ಲಿ ಯುವ ಪೀಳಿಗೆ ಸಾಗಬೇಕು ಎಂದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ  ಗುರುರಾಜ್ ಹಾಲ್ಮಠರವರು ಮಾತನಾಡುತ್ತ – ವಿಧ್ಯಾರ್ಥಿಗಳು ಸರಿಯಾದ ಗುರಿಯನ್ನು ಇಟ್ಟುಕೊಂಡು ಸತತ ಪ್ರಯತ್ನದ ಮೂಲಕ ಉತ್ತಮ ಸಾಧಕರಾಗಿ ಹೊರ ಹೊಮ್ಮಬೇಕು  ಸರ್ಕಾರಿ ಶಾಲೆಗಳ ಮೇಲೆ ಯಾವುದೇ ಕಾರಣಕ್ಕೂ ತಾತ್ಸಾರ ಬೇಡ ದೊಡ್ಡ ಸಾಧಕರೆಲ್ಲ ಸರ್ಕಾರಿ ಶಾಲೆಗಳಲ್ಲಿ ಕಲಿತವರು.ಸರ್ಕಾರಿ ಶಾಲೆಗಳು ಬದುಕಿನ ಮೌಲ್ಯ ಹೇಳಿಕೊಡುತ್ತದೆ ಎಂದರು.

ಬಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ನ ತಾಲೂಕು ಅಧ್ಯಕ್ಷ ರಾದ.

ಮಗ್ಗಲಮಕ್ಕಿ ಗಣೇಶ್ ಕಾರ್ಯಕ್ರಮದ ಕುರಿತು ಮಾತನಾಡಿ ಪ್ರತಿಬೆಗಳು ಹಳ್ಳಿಯಲ್ಲಿ ಮತ್ತು ಸರ್ಕಾರಿ ಶಾಲೆಯಲ್ಲಿ ಜೀವಂತವಾಗಿರುತ್ತವೆ ಎಂದರು.

ಈ ಒಂದು ಕಾರ್ಯಕ್ರಮದಲ್ಲಿ ವಿಧ್ಯಾರ್ಥಿಗಳು ಜನಪದ ಸಂಸ್ಕೃತಿ ಬಿಂಬಿಸುವ ವೇಷ ಭೂಷಣ ಮಾಡಿಕೊಂಡು ಕಾರ್ಯಕ್ರಮದ ಮೆರಗು ಹೆಚ್ಚಿಸಿದರು ಎಲ್ಲರಿಗು ಬಹುಮಾನ ನೀಡಲಾಯಿತು

ಕಾರ್ಯಕ್ರಮದಲ್ಲಿ ಬಕ್ಕಿ ಮಂಜುನಾಥ್ ತಂಡದವರು ಜಾನಪದ ಗಾಯನ ಮಕ್ಕಳನ್ನು ರಂಜಿಸಿತು

ಕಾರ್ಯಕ್ರಮದಲ್ಲಿ  ಶಿಕ್ಷಕರ ಸಂಘದ ಅಧ್ಯಕ್ಷ  ಪುಟ್ಟುರಾಜ್ , ಸಮನ್ವಯ ಅಧಿಕಾರಿ ಶಿವನಂಜೇಗೌಡ, ಮುಖ್ಯ ಶಿಕ್ಷಕಿ ಆಶಾಲತಾ, ನಗರ ಘಟಕದ ಅಧ್ಯಕ್ಷ ಎಂ ಎಸ್ ನಾಗರಾಜ್,

ಪ್ರಧಾನ ಕಾರ್ಯದರ್ಶಿ ರಾಜ್ಯ ಉತ್ತಮ ಶಿಕ್ಷಕ ಪ್ರಸಸ್ತಿಗೆ ಬಾಜನರಾದ ಆರ್ ಪ್ರಕಾಶ್,

ಕಸಾಪ ಹೋಬಳಿ ಅಧ್ಯಕ್ಷರಾದ ಭಾನುಮತಿ.

ಜಾನಪದ ಪರಿಷತ್ತಿನ  ಪಧಾಧಿಕಾರಿಗಳಾದ ಅಶ್ವಿನಿ,ಕೋಮರಾಜ್,

ವಿಧ್ಯಾ,

ಅಲ್ತಾಫ್ ಬಿಳುಗುಳ, ಸುರೇಶ್,ಶಿಕ್ಷಕರು ರಾಜೇಶ್,ದ್ರಾಕ್ಷಯಿಣೀ ಮುಂತಾದವರು ಭಾಗವಹಿಸಿದ್ದರು.

 

ವರದಿ.

ಮಗ್ಗಲಮಕ್ಕಿಗಣೇಶ್.

ಬ್ಯೂರೋ ನ್ಯೂಸ್.

ಉದ್ಯೋಗ ಲಭ್ಯವಿದೆ | ಉಚಿತ ವಸತಿ ಮತ್ತು ಊಟ | ಸೀಮಿತ ಸೀಟುಗಳು ಮಾತ್ರ ಲಭ್ಯವಿದೆ | ತಕ್ಷಣವಾಗಿ ಅರ್ಜಿಯನ್ನು ಹಾಕಿ | Jobs available | With free accommodations and meals | Only limited seats available | Apply immediately |

About Author