day, 00 month 0000
00:00:00
ಅವಿನ್ ಟಿವಿ ಕೆಂಬತ್ ಮಕ್ಕಿ ( ಕೆಂಬತ್ಮಕ್ಕಿ ) ಮನೋಜ್ ಸಾರಥ್ಯದಲ್ಲಿ Avin Tv In the Leadership Of Kembathmakki Manoj ಮೂಡಿಗೆರೆ ಜೆಸಿಐ ಭವನದಲ್ಲಿ ಜೇಸಿ ವತಿಯಿಂದ ವಿಶ್ವ ಕ್ಯಾನ್ಸರ್ ದಿನಾಚರಣೆ ಆಚರಿಸಲಾಯಿತ್ತು .#avintvcom – AVIN TV

लाइव कैलेंडर

April 2024
M T W T F S S
1234567
891011121314
15161718192021
22232425262728
2930  

AVIN TV

Latest Online Breaking News

ಮೂಡಿಗೆರೆ ಜೆಸಿಐ ಭವನದಲ್ಲಿ ಜೇಸಿ ವತಿಯಿಂದ ವಿಶ್ವ ಕ್ಯಾನ್ಸರ್ ದಿನಾಚರಣೆ ಆಚರಿಸಲಾಯಿತ್ತು .#avintvcom

Featured Video Play Icon
post Hospital Stroke care center www.nisargacare.com rehab bedridden care home Nursing Service , Nisarga care Healthcare Rehabilitation Center | Health Care Unit | Pre & Post Operative Care | Home Nursing | Geriatric Care , www.nisargacare.com NISARGA CARE Stroke & Paralysis Rehabilitation Hospital Nisarga Rehab - Centre For Neurological Rehabilitation mentally retarded neuro and Stroke Rehabilitation in Bangalore Best Rehab care www.nisargacare.com http://www.nisargacare.com , http://www.navachaithanyaoldagehome.com , http://www.avintv.com/9211/

ದಿನಾಂಕ : ೦4-02-2021 ರಂದು ಗುರುವಾರ ಮೂಡಿಗೆರೆ ಜೆಸಿಐ ಭವನದಲ್ಲಿ ಜೇಸಿ ವತಿಯಿಂದ ವಿಶ್ವ ಕ್ಯಾನ್ಸರ್ ದಿನಾಚರಣೆ ಆಚರಿಸಲಾಯಿತ್ತು . ಕ್ಯಾನ್ಸರ್ ಬಗ್ಗೆ ಮಹತ್ವ ಹಾಗೆ ಪರಿಣಾಮದ ಬಗ್ಗೆ ಮುಖ್ಯ ಅತಿಥಿಗಳಾಗಿ ಮಾತಾನಾಡಿದ ಜೇಸಿ ಪೂರ್ವಾಧ್ಯಕ್ಷರಾದ ಹಾಗೂ ಮೂಡಿಗೆರೆ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಗಣೇಶ್ ಮಗ್ಗಲಮಕ್ಕಿ ಯಾವರುಅಂದರೆ, ನಾನು ಕ್ಯಾನ್ಸರ್ ಎಂಬ ಜಾಗತಿಕ ಯುದ್ಧದ ವಿರುದ್ಧ ಜಯಶೀಲನಾಗುತ್ತೇನೆ. ನಾನು ಭವಿಷ್ಯದಲ್ಲೂ ವಿಜಯಶಾಲಿಯಾಗುವ ಸಾಮರ್ಥ್ಯ ಹೊಂದಿದ್ದೇನೆ ಎಂದರ್ಥ.ಫೆಬ್ರವರಿ 4 ರಂದು ಪ್ರತಿ ವರ್ಷ ವಿಶ್ವ ಕ್ಯಾನ್ಸರ್ ದಿನವನ್ನು ಆಚರಿಸಲಾಗುತ್ತದೆ. ಕ್ಯಾನ್ಸರ್ನಿಂದ ಬಳಲುತ್ತಿರುವ ರೋಗಿಗಳಿಗೆ ಉಂಟಾಗುತ್ತಿರುವ ಅನ್ಯಾಯವನ್ನು ತಡೆಗಟ್ಟಲು, ಅಂತಾರಾಷ್ಟ್ರೀಯ ಸಮುದಾಯವನ್ನು ಒಟ್ಟುಗೂಡಿಸಲು ಇದು ಒಂದು ಅವಕಾಶವಾಗಿದೆ. ವಿಶ್ವಾದ್ಯಂತ ಕ್ಯಾನ್ಸರ್ ಸಾಂಕ್ರಾಮಿಕ ರೋಗವನ್ನು ಎದುರಿಸಲು ಜಗತ್ತನ್ನು ಒಟ್ಟುಗೂಡಿಸುವ ಜಾಗತಿಕ ಉಪಕ್ರಮ ಇದಾಗಿದೆ. ಒಟ್ಟಾರೆಯಾಗಿ ಮಾರಣಾಂತಿಕ ಕ್ಯಾನ್ಸರ್ ರೋಗದ ವಿರುದ್ಧ ಕ್ರಮ ಕೈಗೊಳ್ಳುವಂತೆ ಸರ್ಕಾರಗಳು ಮತ್ತು ವ್ಯಕ್ತಿಗಳನ್ನು ಒತ್ತಾಯಿಸುವುದು ಈ ದಿನದ ಮುಖ್ಯ ಉದ್ದೇಶವಾಗಿದೆ. ವಿಶ್ವ ಕ್ಯಾನ್ಸರ್ ದಿನದ ಮಹತ್ವ ಕ್ಯಾನ್ಸರ್ ರೋಗದ ಬಗ್ಗೆ ಜಾಗೃತಿ ಮೂಡಿಸುವ ಈ ಉದ್ದೇಶದ ಮಹತ್ವವನ್ನು ಇದು ಪುನರ್ ದೃಢೀಕರಿಸುತ್ತದೆ. ಈ ಜಾಗತಿಕ ತುರ್ತು ಪರಿಸ್ಥಿತಿಯನ್ನು ನಾವು ನಿಭಾಯಿಸಬಹುದು ಮತ್ತು ರೋಗವನ್ನು ನಿಯಂತ್ರಿಸುವಲ್ಲಿ ನಮ್ಮ ಪಾತ್ರವನ್ನು ವಹಿಸಬಹುದು ಎಂಬ ಪ್ರಮುಖ ಸಂದೇಶವನ್ನು ಕಳುಹಿಸಉವುದು ಈ ದಿನದ ಮಹತ್ವವಾಗಿದೆ. ಇದು ಪ್ರತಿಯೊಬ್ಬರನ್ನು ಕಾರ್ಯರೂಪಕ್ಕೆ ತರಲು ಶಕ್ತಗೊಳಿಸುತ್ತದೆ. ಅಭಿಯಾನಗಳು, ತಪ್ಪು ಕಲ್ಪನೆಗಳು, ಕ್ಯಾನ್ಸರ್ ಸುತ್ತಮುತ್ತಲಿನ ತಪ್ಪು ಕಲ್ಪನೆಗಳು, ಕಟ್ಟುಕತೆಗಳನ್ನು ಹೋಗಲಾಡಿಸಿ, ಜನರಿಗೆ ಇದರ ಬಗ್ಗೆ ಶಿಕ್ಷಣ ನೀಡುವುದರ ಜತೆಗೆ ಸರಿಯಾದ ಚಿಕಿತ್ಸೆಯನ್ನು ಪಡೆಯಲು ಮತ್ತು ಸಾವಿನ ಸಂಖ್ಯೆಯನ್ನು ಕಡಿಮೆ ಮಾಡುವುದು ಅಂತಾರಾಷ್ಟ್ರೀಯ ಕ್ಯಾನ್ಸರ್ ದಿನದ ಪ್ರಮುಖ ಉದ್ದೇಶವಾಗಿದೆ. ಜೇಸಿ ಅಧ್ಯಕ್ಷರಾದ ಚಂದ್ರಶೇಖರ್ ಕುನ್ನಹಳ್ಳಿಯವರು ಸ್ವಾಗತಿಸಿ, ಕ್ಯಾನ್ಸರ್ ಬಗ್ಗೆ ಮಹತ್ವದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಬೇಕು, ಜಾಗೃತಿ ಮೂಡಿಸುವ ಉದ್ದೇಶದಿಂದ ಪ್ರತಿ ವರ್ಷ ಫೆಬ್ರವರಿ 4 ರಂದು ವಿಶ್ವ ಕ್ಯಾನ್ಸರ್ ದಿನಾಚರಣೆ ಯಾಗಿ ಆಚರಿಸಲಾಗುತ್ತದೆ. ಜಗತ್ತಿನಾದ್ಯಂತ ಹೆಚ್ಚಿನ ಸಾವುಗಳಿಗೆ ಪ್ರಮುಖ ಕಾರಣ ಕ್ಯಾನ್ಸರ್ ಎಂಬುದು ಗಮನಿಸಬೇಕಾದ ವಿಷಯ. ಭಾರತೀಯ ಜನಸಂಖ್ಯೆಯನ್ನು ಬಾಧಿಸುವ ಪ್ರಮುಖ ಕ್ಯಾನ್ಸರ್ ಗಳೆಂದರೆ ಶ್ವಾಸಕೋಶ, ಸ್ತನ, ಗರ್ಭಕಂಠ, ತಲೆ ಮತ್ತು ಕುತ್ತಿಗೆ ಮತ್ತು ಕೊಲೊರೆಕ್ಟಲ್ ಕ್ಯಾನ್ಸರ್ (CRC).ಜಗತ್ತಿನಾದ್ಯಂತ ಹಲವಾರು ಬಗೆಯ ಕ್ಯಾನ್ಸರ್ ಗಳ ಜೊತೆ, ಪ್ರತಿಯೊಂದು ವಿಧದ ಕ್ಯಾನ್ಸರ್ ಅನ್ನು ಮತ್ತು ಅದು ಮನುಷ್ಯನ ದೇಹದ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದನ್ನು ಅರ್ಥಮಾಡಿಕೊಳ್ಳುವುದು ಮುಖ್ಯ. ವಿಶ್ವ ಕ್ಯಾನ್ಸರ್ ದಿನದಂದು ಎಲ್ಲರೂ ಒಂದಾಗಿ ಕ್ಯಾನ್ಸರ್ ಮುಕ್ತ ಆರೋಗ್ಯಕರ ಜಗತ್ತನ್ನು ಸೃಷ್ಟಿಸೋಣ ಎಂದು ಹೇಳಿದರು. ಜೇಸಿ ಕಾರ್ಯದರ್ಶಿ ಶ್ರೇಷ್ಠಿ ವಂದಿಸಿದರು. ಕಾರ್ಯ ಕ್ರಮದಲ್ಲಿ ಮೂಡಿಗೆರೆ ಜೇಸಿ ಅಧ್ಯಕ್ಷರಾದ ಜೇಸಿ ಚಂದ್ರಶೇಖರ್ ಕುನ್ನಹಳ್ಳಿ, ಜೇಸಿ ಕಾರ್ಯದರ್ಶಿ ಶ್ರೇಷ್ಠಿ, ಜೇಸಿ ಪೂರ್ವಾಧ್ಯಕ್ಷರ ಹಾಗೂ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರು ಆದ ಗಣೇಶ್ ಮಗ್ಗಲಮಕ್ಕಿ ಯವರು, ಹಾಗೂ ಪೂರ್ವಾಧ್ಯಕ್ಷರು ದಾರದಹಳ್ಳಿ ಸಹಕಾರ ಕೃಷಿ ಪತ್ತಿನ ಅಧ್ಯಕ್ಷರು ಆದ ರವಿ ಹಾಲೂರು, ಜೇಸಿ ಪೂರ್ವಾಧ್ಯಕ್ಷರುಗಳಾದ ವಿನೋದ್ ಕುಮಾರ್, ತೇಜಸ್ವಿಯವರು, ವಿಜಯ್ ಕುಮಾರ್, ಹರೀಶ್. ಟಿ , ನಾಗೇಶ್ ಮಾಡ್ಕಲ್, ಆಶೋಕ್, ನಯನ್ ಕಣಚೂರು, ಶಶಿಕಿರಣ್ ಮಾಕೋನಹಳ್ಳಿ ರವರು, ಜೇಸಿ ವಿಶ್ವಕುಮಾರ್, ಹಾಗೂ ಹಲವಾರು ಜೇಸಿ ಸದಸ್ಯರು ಪಾಲುಗೊಂಡಿದ್ದರು. ವರದಿ. ಮಗ್ಗಲಮಕ್ಕಿಗಣೇಶ್. ಬ್ಯೂರೋ ನ್ಯೂಸ್.

ಉದ್ಯೋಗ ಲಭ್ಯವಿದೆ | ಉಚಿತ ವಸತಿ ಮತ್ತು ಊಟ | ಸೀಮಿತ ಸೀಟುಗಳು ಮಾತ್ರ ಲಭ್ಯವಿದೆ | ತಕ್ಷಣವಾಗಿ ಅರ್ಜಿಯನ್ನು ಹಾಕಿ | Jobs available | With free accommodations and meals | Only limited seats available | Apply immediately |

About Author