day, 00 month 0000
00:00:00
ಅವಿನ್ ಟಿವಿ ಕೆಂಬತ್ ಮಕ್ಕಿ ( ಕೆಂಬತ್ಮಕ್ಕಿ ) ಮನೋಜ್ ಸಾರಥ್ಯದಲ್ಲಿ Avin Tv In the Leadership Of Kembathmakki Manoj ಶ್ರೀ ರತ್ನಮ್ಮ ಎಂ.ಯು.ಕಾಳೇಗೌಡ ದಂಪತಿಗಳ ಮಗನಾಗಿ ಜನಿಸಿದ್ದು ಬಿ.ಎ ಪದವೀದರರಾಗಿದ್ದಾರೆ. #avintvcom – AVIN TV

लाइव कैलेंडर

April 2024
M T W T F S S
1234567
891011121314
15161718192021
22232425262728
2930  

AVIN TV

Latest Online Breaking News

ಶ್ರೀ ರತ್ನಮ್ಮ ಎಂ.ಯು.ಕಾಳೇಗೌಡ ದಂಪತಿಗಳ ಮಗನಾಗಿ ಜನಿಸಿದ್ದು ಬಿ.ಎ ಪದವೀದರರಾಗಿದ್ದಾರೆ. #avintvcom

Featured Video Play Icon
post Hospital Stroke care center www.nisargacare.com rehab bedridden care home Nursing Service , Nisarga care Healthcare Rehabilitation Center | Health Care Unit | Pre & Post Operative Care | Home Nursing | Geriatric Care , www.nisargacare.com NISARGA CARE Stroke & Paralysis Rehabilitation Hospital Nisarga Rehab - Centre For Neurological Rehabilitation mentally retarded neuro and Stroke Rehabilitation in Bangalore Best Rehab care www.nisargacare.com http://www.nisargacare.com , http://www.navachaithanyaoldagehome.com , http://www.avintv.com/9211/

ಪ್ರಮಾಣಿಕತನಕ್ಕೆ ಸಂದ ಗೌರವ……….

1961 ನವೆಂಬರ್ 28 ರಂದು ಶ್ರೀಮತಿ ಶ್ರೀ ರತ್ನಮ್ಮ ಎಂ.ಯು.ಕಾಳೇಗೌಡ ದಂಪತಿಗಳ ಮಗನಾಗಿ ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕ್  ಮಾಕೋನಹಳ್ಳಿ ಗ್ರಾಮದಲ್ಲಿ ಜನಿಸಿದ್ದು    ಬಿ.ಎ ಪದವೀದರರಾಗಿದ್ದಾರೆ.

ಕಾಲೇಜು ದಿನಗಳಲ್ಲಿ ವಿವಿಧ ಸಂಘಟನೆಗಳು ಮತ್ತು ಸಂಘ ಸಂಸ್ಥೆಗಳಲ್ಲಿ ಹೋರಾಟಗಳ ಮೂಲಕ ಕಾರ್ಯನಿರ್ವಹಿಸಿ 1989ರಲ್ಲಿ ಬಿಜೆಪಿ ಸೇರುವ ಮೂಲಕ ರಾಜಕೀಯ ಪಯಣ ಪ್ರಾರಂಭಿಸಿದ್ದು..

1992 ನೇ ಇಸವಿಯಲ್ಲಿ ಕಾಶ್ಮೀರ ಉಳಿಸಿ ಹೋರಾಟದ ಪರ ಅಲ್ಲಿನ ಲಾಲ್‌ಚೌಕ್‌ನಲ್ಲಿ ನಡೆದ ಏಕತಾ ಯಾತ್ರೆ ಹೋರಾಟದಲ್ಲಿ ಮಾನ್ಯ ಸಿ.ಟಿ.ರವಿ ಮತ್ತು ಇನ್ನಿತರರೊಂದಿಗೆ ಭಾಗವಹಿಸಿದ್ದು ಇವರ ರಾಜಕೀಯ ಪಯಣಕ್ಕೆ ತಿರುವು ನೀಡಿತು..

. 1991 ರಿಂದ 98ರ ವರೆಗೆ ತಾಲೂಕು ಯುವಮೋರ್ಚಾ ಅದ್ಯಕ್ಷರಾಗಿ,

1994 ರಿಂದ 2೦೦೦ದ ವರೆಗೆ ಸ್ವಥಶ್ಚಲಿ ಆಟೋ ಚಾಲಕರ ಸಂಘದ ಗೌರವಾಧ್ಯಕ್ಷರಾಗಿ, 1998ರಿಂದ 2001ರ ವರೆಗೆ ಜಿಲ್ಲಾ ಯುವಮೋರ್ಚಾ ಅಧ್ಯಕ್ಷರಾಗಿ,

2೦೦೦ನೇ ಇಸವಿಯಿಂದ 2೦೦5ರ ವರೆಗೆ ಗೋಣಿಬೀಡು ಕ್ಷೇತ್ರದಿಂದ ಜಿಲ್ಲಾ ಪಂಚಾಯಿತಿ ಸದಸ್ಯರಾಗಿ ಆಯ್ಕೆಯಾಗುವ ಮೂಲಕ ಬಿಜೆಪಿ ಪಕ್ಷದಿಂದ ಜನಪ್ರತಿನಿಧಿಯಾಗಿ ಜಿಲ್ಲಾ ಬಿಜೆಪಿ ಬೆಳವಣಿಗೆಗೆ ಸಾಕ್ಷಿಯಾದರು.

2001 ರಿಂದ 2004ರ ವೆರೆಗೆ ಜಿಲ್ಲಾ ಬಿಜೆಪಿ ಅಧ್ಯಕ್ಷರು,

2004ರಿಂದ 2೦೦7ರ ವರೆಗೆ ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯರು, 2007ರಿಂದ 2011ರ ವರೆಗೆ ಎರಡನೇ ಬಾರಿಗೆ ಜಿಲ್ಲಾ ಬಿಜೆಪಿ ಅಧ್ಯಕ್ಷರಾಗಿ  ಕಾರ್ಯ ನಿರ್ವಹಿಸಿ  ಜಿಲ್ಲೆಯಲ್ಲಿ ಪಕ್ಷ ಕಟ್ಟಿ ಬೆಳೆಸುವಲ್ಲಿ ತಳಮಟ್ಟದ ಕಾರ್ಯಕರ್ತರೊಂದಿಗೆ ಬೆರೆತು ಅವಿರತ ಶ್ರಮ ವಹಿಸಿದ್ದರು.

ಯಡಿಯೂರಪ್ಪ ಮುಖ್ಯಮಂತ್ರಿಯಾದ ಪ್ರಥಮ ಅವಧಿಯ 2010-13 (ಜಂಗಲ್ ಲಾಡ್ಜಸ್ ಆಂಡ್ ರೆಸಾರ್ಟ್ಸ್) ರಾಜ್ಯ ಅರಣ್ಯ ಮತ್ತು ವಿಹಾರಧಾಮ ನಿಗಮ ಮಂಡಳಿ ಅಧ್ಯಕ್ಷರಾಗಿ, 2013ರಲ್ಲಿ ಹಾಸನ ಮತ್ತು ಕೊಡಗು ಜಿಲ್ಲಾ ಬಿಜೆಪಿ ಉಸ್ತುವಾರಿಯಾಗಿ, ಮತ್ತು ಮಂಡ್ಯ ಜಿಲ್ಲೆ ಬಿಜೆಪಿ ಸದಸ್ಯತ್ವ ಅಭಿಯಾನ ಪ್ರಮುಖ್ ಆಗಿ, 2016  ರಿಂದ ಪ್ರಸ್ತುತ ಚಿಕ್ಕಮಗಳೂರು ವಿಧಾನ ಪರಿಷತ್ ಸದಸ್ಯರಾಗಿ ಆಯ್ಕೆಯಾಗಿ ಕಾರ್ಯ ನಿರ್ವಹಿಸುತ್ತಿದ್ದು ರಾಜ್ಯದ ಇತಿಹಾಸದಲ್ಲೇ ಮೊದಲ ಬಾರಿಗೆ ಜಿಲ್ಲೆಯ ಗ್ರಾಮ ಪಂಚಾಯಿತಿ ಗಳಿಗೆ ಜನರೇಟರ್ ನೀಡುವುದಕ್ಕಾಗಿ ಸರ್ಕಾರದೊಂದಿಗೆ ಚರ್ಚಿಸಿ ವಿಶೇಷ ಅನುಮತಿ ಮೂಲಕ ಜಿಲ್ಲೆಯ ಗ್ರಾಮ ಪಂಚಾಯಿತಿ ಗಳಿಗೆ ಜನರೇಟರ್ ನೀಡಿ ಕ್ರಾಂತಿಕಾರಕ ಬದಲಾವಣೆ ತಂದಿದ್ದಾರೆ.  ಹಾಗೂ ಪರಿಷತ್ ನಲ್ಲಿ ರಾಜ್ಯದ ಅನೇಕ ಜ್ವಾಲಂತ ಸಮಸ್ಯೆ ಗಳ ಬಗ್ಗೆ ಸರ್ಕಾರದ ಗಮನ ಸೆಳೆದಿದ್ದು ಇಂದು ಇವರ ಪಕ್ಷ ನಿಷ್ಠೆ ಮತ್ತು ಜನಬೆಂಬಲ ಹಾಗೂ ಕಳಂಕ ರಹಿತ ಇವರ ವ್ಯಕ್ತಿತ್ವದಿಂದಾಗಿ ವಿಧಾನ ಪರಿಷತ್ ಉಪ ಸಭಾಪತಿ ಸ್ಥಾನವು ಇವರ ಅರ್ಹತೆಗೆ ಹುಡುಕಿಕೊಂಡು ಬಂದಿದ್ದು ಶ್ರಮಕ್ಕೆ ಸಂದ ಗೌರವವಾಗಿದೆ.

ಕೆ.ಪಿ.ಪೂರ್ಣ ಚಂದ್ರ ತೇಜಸ್ವಿಯವರು ಹೇಳಿದ ಚಿಕ್ಕಮಗಳೂರು ಜಿಲ್ಲೆ ಶಾಪಗ್ರಸ್ತ ಜಿಲ್ಲೆ ಎಂಬ ವಾಕ್ಯ ಮಾಯವಾಗಲಿ ಎಂದು ಹಾರೈಸೊಣ.

ವರದಿ.

ಮಗ್ಗಲಮಕ್ಕಿಗಣೇಶ್.

ಬ್ಯೂರೋ ನ್ಯೂಸ್.

ಉದ್ಯೋಗ ಲಭ್ಯವಿದೆ | ಉಚಿತ ವಸತಿ ಮತ್ತು ಊಟ | ಸೀಮಿತ ಸೀಟುಗಳು ಮಾತ್ರ ಲಭ್ಯವಿದೆ | ತಕ್ಷಣವಾಗಿ ಅರ್ಜಿಯನ್ನು ಹಾಕಿ | Jobs available | With free accommodations and meals | Only limited seats available | Apply immediately |

About Author