day, 00 month 0000
00:00:00
ಅವಿನ್ ಟಿವಿ ಕೆಂಬತ್ ಮಕ್ಕಿ ( ಕೆಂಬತ್ಮಕ್ಕಿ ) ಮನೋಜ್ ಸಾರಥ್ಯದಲ್ಲಿ Avin Tv In the Leadership Of Kembathmakki Manoj ವಿಶ್ವ ಕುಮಾರ್ ರವರು ಮಾತನಾಡಿ ಸದಸ್ಯರಿಗೆ ವಂದಿಸಿ ಮುಂದೆಯೂ ತಮ್ಮ ಸಲಹೆ ಸಹಕಾರ ನೀಡಬೇಕೆಂದು ಮನವಿ ಮಾಡಿದರು#avintvcom – AVIN TV

लाइव कैलेंडर

April 2024
M T W T F S S
1234567
891011121314
15161718192021
22232425262728
2930  

AVIN TV

Latest Online Breaking News

ವಿಶ್ವ ಕುಮಾರ್ ರವರು ಮಾತನಾಡಿ ಸದಸ್ಯರಿಗೆ ವಂದಿಸಿ ಮುಂದೆಯೂ ತಮ್ಮ ಸಲಹೆ ಸಹಕಾರ ನೀಡಬೇಕೆಂದು ಮನವಿ ಮಾಡಿದರು#avintvcom

post Hospital Stroke care center www.nisargacare.com rehab bedridden care home Nursing Service , Nisarga care Healthcare Rehabilitation Center | Health Care Unit | Pre & Post Operative Care | Home Nursing | Geriatric Care , www.nisargacare.com NISARGA CARE Stroke & Paralysis Rehabilitation Hospital Nisarga Rehab - Centre For Neurological Rehabilitation mentally retarded neuro and Stroke Rehabilitation in Bangalore Best Rehab care www.nisargacare.com http://www.nisargacare.com , http://www.navachaithanyaoldagehome.com , http://www.avintv.com/9211/

ತುಳುಕೂಟ( ರಿ) ಮೂಡಿಗೆರೆ.

 

ದಿನಾಂಕ 25 -01 -2021 ನೇ ಸೋಮವಾರ ಸಂಜೆ 5.30 ಗಂಟೆಗೆ 2019 -20 ನೇ ಸಾಲಿನ ಸರ್ವ ಸದಸ್ಯರ ಸಭೆಯನ್ನು ಅಧ್ಯಕ್ಷರಾದ ಪಿ. ವಿಶ್ವ ಕುಮಾರ್ ಅವರ ಅಧ್ಯಕ್ಷತೆಯಲ್ಲಿ ನಡೆಯಿತು .ಈ ಸಭೆಯು ‌‌‌ಬಂಟರ ಬವನ ಕೆ.ಯಂ.ರಸ್ತೆ ಮೂಡಿಗೆರೆ ಇಲ್ಲಿ ಆಯೋಜಿಸಲಾಗಿತ್ತು .ಈ ಸಭೆಯಲ್ಲಿ ವಸಂತ.ಯಸ್. ಪೂಜಾರಿಯವರು ಎಲ್ಲರನ್ನು ಸ್ವಾಗತಿಸಿದರು .ಕಾರ್ಯಕ್ರಮದ ವರದಿಯನ್ನು ಜಾನಪ್ಪ ಮಾಸ್ಟರ್ ಇವರು ಮಂಡಿಸಿದರು .ವಾರ್ಷಿಕ  ಖರ್ಚುವೆಚ್ಚವನ್ನು ಜಾನ್ ಡಿಸೋಜಾ ಇವರು ಸಭೆಗೆ ವಿವರ ನೀಡಿದರು .ನಂತರ ಅಧ್ಯಕ್ಷರಾದ

ವಿಶ್ವ ಕುಮಾರ್ ರವರು ಮಾತನಾಡಿ ನನ್ನ ಅವಧಿಯಲ್ಲಿ ಸಲಹೆ ಸಹಕಾರ ನೀಡಿ ಕಾರ್ಯಕ್ರಮದ ಯಶಸ್ವಿಗೆ ಸಹಕರಿಸಿದ ಎಲ್ಲಾ ಸದಸ್ಯರಿಗೆ ವಂದಿಸಿ ಮುಂದೆಯೂ ತಮ್ಮ ಸಲಹೆ ಸಹಕಾರ ನೀಡಬೇಕೆಂದು ಮನವಿ ಮಾಡಿದರು.

ನಂತರ 2020 -21 ನೇ ಸಾಲಿನ ನೂತನ ಕಾರ್ಯಕಾರಿ ಮಂಡಳಿ ಈ ಕೆಳಗಿನಂತೆ ಆಯ್ಕೆಯಾಗಿರುತ್ತದೆ. ಅಧ್ಯಕ್ಷರಾಗಿ  ಜಾನಪ್ಪ  ಮಾಸ್ಟರ್ ,

ಕಾರ್ಯದರ್ಶಿಯಾಗಿ ಜಾನ್ ಡಿ ಸೋಜ ,ಖಜಾಂಚಿ ದಿನಕರ್ ಆಚಾರ್ಯ, ಉಪಾಧ್ಯಕ್ಷರಾಗಿ ಹರೀಶ್. ಟಿ

ಮತ್ತು ಯೋಗೇಶ್ ಪೂಜಾರಿ,

ಸಹ ಕಾರ್ಯದರ್ಶಿಯಾಗಿ ವಿಶ್ವನಾಥ  ಶೆಟ್ಟಿ ಮತ್ತು ಕಾರ್ಯಕ್ರಮದ ನಿರ್ದೇಶಕರಾಗಿ

ವಿನೋದ್ ಕುಮಾರ್ ಶೆಟ್ಟಿ ಆಯ್ಕೆಯಾಗಿರುತ್ತಾರೆ.

ನೂತನ ಅಧ್ಯಕ್ಷರು ಮಾತನಾಡಿ ಎಲ್ಲರ ಸಹಕಾರ ಕೋರಿದರು ಕಾರ್ಯದರ್ಶಿ ಜಾನ್ ಡಿ ಸೋಜ ಅವರು ಎಲ್ಲರನ್ನೂ ವಂದಿಸಿದರು.

ತುಳುಕೂಟದ ಉದ್ದೇಶ.

ಮೂಡಿಗೆರೆ ತಾಲೂಕಿನ ಎಲ್ಲ ತುಳುಭಾಷೆಯ ಜನಾಂಗವನ್ನು ಒಂದೇ ವೇದಿಕೆಯಲ್ಲಿ ಸೇರಿಸುವ ಉದ್ದೇಶ ಇಟ್ಟುಕೊಂಡು ವರ್ಷಕ್ಕೆ ಒಂದೆರಡು ಕಾರ್ಯಕ್ರಮ ಮಾಡಿ ಎಲ್ಲರಿಗೂ ತುಳುಭಾಷೆ, ಸಂಸ್ಕೃತಿಯ ಬಗ್ಗೆ ಉಪನ್ಯಾಸ ಹಾಗೂ ಮಾಹಿತಿ ,ಸಾಂಸ್ಕೃತಿಕ ಕಾರ್ಯಕ್ರಮ ನೃತ್ಯ, ನಾಟಕವನ್ನು ಮಾಡುವುದರೊಂದಿಗೆ ಮನರಂಜನೆ ನೀಡುವುದು. ತುಳುಕೂಟ ಸಾರ್ವಜನಿಕವಾಗಿ ಇತ್ತೀಚಿಗೆ ಪ್ರಪಂಚದಾದ್ಯಂತ ಹಬ್ಬಿರುವ ಕರೋನವೈರಸ್ ಬಗ್ಗೆ ಸಾರ್ವಜನಿಕ ಜಾಗೃತಿ ಮೂಡಿಸುವ ಕೆಲಸದಲ್ಲಿ ಭಾಗಿಯಾಗಿ life line tender chiken ಚಿಕ್ಕಮಂಗಳೂರು ಇವರು ಉಚಿತವಾಗಿ ನೀಡಿರುವ Camphora-1M ಎಂಬ ರೋಗನಿರೋಧಕ ಶಕ್ತಿ ಹೆಚ್ಚಿಸುವ ಹೋಮಿಯೋಪತಿ ಗುಳಿಗೆಗಳನ್ನು ತರಿಸಿ ಮೂಡಿಗೆರೆ ಪೊಲೀಸ್ ಠಾಣೆ ಸಿಬ್ಬಂದಿ, ಎಲ್ಐಸಿ ಕಚೇರಿ, ತಾಲೂಕು ಕಚೇರಿ, ಬ್ಯಾಂಕುಗಳು, ಲೋಕೋಪಯೋಗಿ ಇಲಾಖೆ, ಸಚೇತನ ಯುವ ಸಂಘ, ರೋಟರಿ ಸಂಸ್ಥೆ ,ಲಯನ್ ಸಂಸ್ಥೆ ,ಆಟೋ ಮಾಲೀಕರು ಚಾಲಕರು ಸಂಘ , ಗಂಗನ ಮಕ್ಕಿ ಗ್ಯಾರೇಜ್ ಸಂಘ, ಮೂಡಿಗೆರೆ ಚರ್ಚ್ ಹಾಗೂ ಹಲವಾರು ಸಾರ್ವಜನಿಕರಿಗೆ ಸುಮಾರು 5000 ಗುಳಿಗೆಗಳನ್ನು ವಿತರಿಸಲಾಯಿತು ,

ಇದಲ್ಲದೆ ಫೆಬ್ರವರಿ 2019ನೇ ತಿಂಗಳಲ್ಲಿ ನಡೆದ ಮಹಾಶಿವರಾತ್ರಿ ಪ್ರಯುಕ್ತ ಶ್ರೀ ಧರ್ಮಸ್ಥಳ ಪಾದಯಾತ್ರೆಗಳಿಗೆ ಮೂಡಿಗೆರೆಯ ನೀರ್ ಗಂಡಿ ಎಂಬಲ್ಲಿ ಆಯೋಜಿಸಿದ ಉಚಿತ ಆರೋಗ್ಯ ತಪಾಸಣಾ ಶಿಬಿರ ಹಾಗೂ ಅನ್ನದಾನ ಕಾರ್ಯಕ್ರಮದಲ್ಲಿ ಎಲ್ಲ  ತುಳುಕೂಟದ ಸದಸ್ಯರು ಸಕ್ರಿಯವಾಗಿ ಪಾಲ್ಗೊಂಡು ಸಮಾಜಸೇವೆ ಮಾಡಿರುತ್ತಾರೆ.

ವರದಿ.

ಮಗ್ಗಲಮಕ್ಕಿಗಣೇಶ್.

ಬ್ಯೂರೋ ನ್ಯೂಸ್.

ಉದ್ಯೋಗ ಲಭ್ಯವಿದೆ | ಉಚಿತ ವಸತಿ ಮತ್ತು ಊಟ | ಸೀಮಿತ ಸೀಟುಗಳು ಮಾತ್ರ ಲಭ್ಯವಿದೆ | ತಕ್ಷಣವಾಗಿ ಅರ್ಜಿಯನ್ನು ಹಾಕಿ | Jobs available | With free accommodations and meals | Only limited seats available | Apply immediately |

About Author