day, 00 month 0000
00:00:00
ಅವಿನ್ ಟಿವಿ ಕೆಂಬತ್ ಮಕ್ಕಿ ( ಕೆಂಬತ್ಮಕ್ಕಿ ) ಮನೋಜ್ ಸಾರಥ್ಯದಲ್ಲಿ Avin Tv In the Leadership Of Kembathmakki Manoj ಕನ್ನಡ ಬಲ್ಲ ಸಿಬ್ಬಂದಿಗಳು ಮಾತ್ರ ಬ್ಯಾಂಕ್‍ನಲ್ಲಿ ಕಾರ್ಯ ನಿರ್ವಹಿಸಲಿ ಕಸಾಪ ವತಿಯಿಂದ ಸಾಹಿತ್ಯ ಸಂಕ್ರಾಂತಿ ಕಾರ್ಯಕ್ರಮ#avintvcom – AVIN TV

लाइव कैलेंडर

April 2024
M T W T F S S
1234567
891011121314
15161718192021
22232425262728
2930  

AVIN TV

Latest Online Breaking News

ಕನ್ನಡ ಬಲ್ಲ ಸಿಬ್ಬಂದಿಗಳು ಮಾತ್ರ ಬ್ಯಾಂಕ್‍ನಲ್ಲಿ ಕಾರ್ಯ ನಿರ್ವಹಿಸಲಿ ಕಸಾಪ ವತಿಯಿಂದ ಸಾಹಿತ್ಯ ಸಂಕ್ರಾಂತಿ ಕಾರ್ಯಕ್ರಮ#avintvcom

post Hospital Stroke care center www.nisargacare.com rehab bedridden care home Nursing Service , Nisarga care Healthcare Rehabilitation Center | Health Care Unit | Pre & Post Operative Care | Home Nursing | Geriatric Care , www.nisargacare.com NISARGA CARE Stroke & Paralysis Rehabilitation Hospital Nisarga Rehab - Centre For Neurological Rehabilitation mentally retarded neuro and Stroke Rehabilitation in Bangalore Best Rehab care www.nisargacare.com http://www.nisargacare.com , http://www.navachaithanyaoldagehome.com , http://www.avintv.com/9211/

ಕನ್ನಡ ಬಲ್ಲ ಸಿಬ್ಬಂದಿಗಳು ಮಾತ್ರ ಬ್ಯಾಂಕ್‍ನಲ್ಲಿ ಕಾರ್ಯ ನಿರ್ವಹಿಸಲಿ
ಕಸಾಪ ವತಿಯಿಂದ ಸಾಹಿತ್ಯ ಸಂಕ್ರಾಂತಿ ಕಾರ್ಯಕ್ರಮ

ಕನ್ನಡ ಬಾರದ ಸಿಬ್ಬಂದಿಗಳು ರಾಜ್ಯದ ಬ್ಯಾಂಕ್‍ಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದು ಕನ್ನಡ ಬಲ್ಲ ಸಿಬ್ಬಂದಿಗಳು ಮಾತ್ರ ರಾಜ್ಯದ ಬ್ಯಾಂಕ್‍ನಲ್ಲಿ ಕಾರ್ಯ ನಿರ್ವಹಿಸುವಂತೆ ಸರ್ಕಾರ ನಿಯಮ ರೂಪಿಸುವ ಅಗತ್ಯವಿದೆ ಎಂದು ತಾಲ್ಲೂಕು ಕಸಾಪ ಅಧ್ಯಕ್ಷ ಮಗ್ಗಲಮಕ್ಕಿ ಗಣೇಶ್ ಹೇಳಿದರು.
ಮೂಡಿಗೆರೆ ಹಾಗೂ ಬಣಕಲ್ ಕಸಾಪ ವತಿಯಿಂದ ಜಾವಳಿ ಸಮೀಪದ ಮೇಲುಕೂಡಿಗೆ ಗ್ರಾಮದಲ್ಲಿ ನಡೆದ ಸಾಹಿತ್ಯ ಸಂಕ್ರಾಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಜಾವಳಿ ಸೇರಿದಂತೆ ಬಹುತೇಕ ಕಡೆಗಳಲ್ಲಿ ಹೊರ ರಾಜ್ಯದ ಸಿಬ್ಬಂದಿಗಳು ಬ್ಯಾಂಕ್‍ಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದು ಕನ್ನಡ ಬಾರದೆ ಇರುವುದರಿಂದ ಬ್ಯಾಂಕ್‍ಗೆ ಬರುವ ಗ್ರಾಹಕರಿಗೆ ತೊಂದರೆಯಾಗುತ್ತಿದೆ. ಬ್ಯಾಂಕ್‍ನಲ್ಲಿ ಕಾರ್ಯ ನಿರ್ವಹಿಸುವ ಸಿಬ್ಬಂದಿಗಳು ಕಡ್ಡಾಯವಾಗಿ ಕನ್ನಡ ಕಲಿಯಬೇಕು ಅಥವಾ ಸರ್ಕಾರ ಕನ್ನಡ ಬಲ್ಲ ಸಿಬ್ಬಂದಿಗಳನ್ನು ಬ್ಯಾಂಕ್‍ಗಳಲ್ಲಿ ನೇಮಿಸಬೇಕಿದೆ ಎಂದರು.
ಬಣಕಲ್ ಕಸಾಪ ಅಧ್ಯಕ್ಷ ವಸಂತ್ ಹಾರ್ಗೋಡು ಮಾತನಾಡಿ, ಪ್ರತಿಯೊಂದು ಸಮುದಾಯದ ಹಬ್ಬ ಆಚರಣೆಗಳಲ್ಲಿ ವೈವಿದ್ಯತೆ ಇದೆ. ಆಚರಣೆಯ ಹಿಂದಿನ ಉದ್ದೇಶವನ್ನು ಅರಿತು ಹಬ್ಬ ಆಚರಿಸಿದರೆ ಹಬ್ಬಕ್ಕೆ ಮತ್ತಷ್ಟು ಕಳೆ ಬರುತ್ತದೆ. ಮಕ್ಕಳಿಗೆ ಪೋಷಕರು ಹಬ್ಬದ ಹಿಂದಿನ ಉದ್ದೇಶವನ್ನು ಹೇಳಿಕೊಡುವ ಅಗತ್ಯವಿದೆ ಎಂದರು.
ಈ ಸಂದರ್ಭದಲ್ಲಿ ತಾಲ್ಲೂಕು ಲಯನ್ಸ್ ಸಂಸ್ಥೆ ಅಧ್ಯಕ್ಷ ಗೋಪಾಲಗೌಡ, ಕಸಾಪ ಕಾರ್ಯದರ್ಶಿ.ಲಕ್ಷ್ಮಣಗೌಡ. ಜಿಲ್ಲಾ ಕಸಾಪ ಸಂಘಟನಾ ಕಾರ್ಯದರ್ಶಿ ಚಂದ್ರಪ್ಪ, ಮಲ್ನಾಡ್ ಗಲ್ಪ್ ಅಸೋಸಿಯೇಷನ್ ಅಧ್ಯಕ್ಷ ಹಮೀದ್ ಸಬ್ಬೇನಹಳ್ಳಿ, ಜಾವಳಿ ಗ್ರಾ.ಪಂ ಸದಸ್ಯ ಮನೋಹರ್, ಪ್ರದೀಪ್, ಕಸಾಪ ಪದಾಧಿಕಾರಿಗಳಾದ ಚನ್ನಕೇಶವಗೌಡ, ಡಿ.ಕೆ ಲಕ್ಷ್ಮಣಗೌಡ, ಬಕ್ಕಿ ಮಂಜುನಾಥ್, ಪರೀಕ್ಷಿತ್, ಭಕ್ತೇಶ್, ನಾಗರಾಜ್, ಶೇಖರಪ್ಪ, ಲಿಂಗರಾಜ್, ಪಿ.ಕೆ ಮಂಜುನಾಥ್, ವೆಂಕಟೇಶ್, ಕಾರ್ಯಕ್ರಮದ ಸಂಯೋಜಕರಾದ ಮಂಜುನಾಥ್, ಕೃಷ್ಣಪ್ಪ, ಹರೀಶ್, ಸುನೀಲ್, ಶ್ರೀಧರ್, ನಾರಾಯಣ ಮುಂತಾದವರು ಇದ್ದರು.

ವರದಿ.
ಮಗ್ಗಲಮಕ್ಕಿಗಣೇಶ.
ಸ್ಥಾನಿಕ ಸಂಪಾದಕ.
ಅವಿನ್ ಟಿವಿ.

ಉದ್ಯೋಗ ಲಭ್ಯವಿದೆ | ಉಚಿತ ವಸತಿ ಮತ್ತು ಊಟ | ಸೀಮಿತ ಸೀಟುಗಳು ಮಾತ್ರ ಲಭ್ಯವಿದೆ | ತಕ್ಷಣವಾಗಿ ಅರ್ಜಿಯನ್ನು ಹಾಕಿ | Jobs available | With free accommodations and meals | Only limited seats available | Apply immediately |

About Author