day, 00 month 0000
00:00:00
ಅವಿನ್ ಟಿವಿ ಕೆಂಬತ್ ಮಕ್ಕಿ ( ಕೆಂಬತ್ಮಕ್ಕಿ ) ಮನೋಜ್ ಸಾರಥ್ಯದಲ್ಲಿ Avin Tv In the Leadership Of Kembathmakki Manoj ಬ್ಬರಿಗೊಬ್ಬರು ಪರಸ್ಪರ ಸೌಹಾರ್ದ ಸಹಕಾರ ಮನೊಭಾವನೆಯಿಂದ ಮತ್ತೊಬ್ಬರನ್ನು ಬೆಳೆಸಿ ತಾವು ಬೆಳೆಯುವ…#avintvcom – AVIN TV

लाइव कैलेंडर

April 2024
M T W T F S S
1234567
891011121314
15161718192021
22232425262728
2930  

AVIN TV

Latest Online Breaking News

ಬ್ಬರಿಗೊಬ್ಬರು ಪರಸ್ಪರ ಸೌಹಾರ್ದ ಸಹಕಾರ ಮನೊಭಾವನೆಯಿಂದ ಮತ್ತೊಬ್ಬರನ್ನು ಬೆಳೆಸಿ ತಾವು ಬೆಳೆಯುವ…#avintvcom

Featured Video Play Icon
post Hospital Stroke care center www.nisargacare.com rehab bedridden care home Nursing Service , Nisarga care Healthcare Rehabilitation Center | Health Care Unit | Pre & Post Operative Care | Home Nursing | Geriatric Care , www.nisargacare.com NISARGA CARE Stroke & Paralysis Rehabilitation Hospital Nisarga Rehab - Centre For Neurological Rehabilitation mentally retarded neuro and Stroke Rehabilitation in Bangalore Best Rehab care www.nisargacare.com http://www.nisargacare.com , http://www.navachaithanyaoldagehome.com , http://www.avintv.com/9211/

ಒಬ್ಬರಿಗೊಬ್ಬರು ಪರಸ್ಪರ ಸೌಹಾರ್ದ ಸಹಕಾರ ಮನೊಭಾವನೆಯಿಂದ ಮತ್ತೊಬ್ಬರನ್ನು ಬೆಳೆಸಿ ತಾವು ಬೆಳೆಯುವ ಗುಣವನ್ನು ಹೊಂದಿದ್ದರೆ ಮಾತ್ರ ಸಮಾಜದ ಅಭಿವೃದ್ದಿ ಸಾಧ್ಯ ಎಂದು ಶೆಟ್ಟರಮಠದ ಪ.ಪೂ ಶ್ರೀ ಮರುಳಸಿದ್ದ ಮಹಾಸ್ವಾಮಿಜಿ ಅವರು ಹೇಳಿದರು.

ಅವರು ಸ್ಥಳೀಯ ಸಂಕೋನಟ್ಟಿ ಗ್ರಾ.ಪಂ ನೂತನ ಸದಸ್ಯ ಪರಶುರಾಮ ಸೋನಕರ ಅವರು ಆಯೋಜಿಸಿದ್ದ ಶ್ರೀಮತಿ ಸಾವಿತ್ರಿಬಾಯಿ ಫುಲೆ ಜಯಂತ್ಯೋತ್ಸವ ಹಾಗೂ ನೂತನ ಗ್ರಾ.ಪಂ ಸದಸ್ಯರಿಗೆ ಸನ್ಮಾನ ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡುತ್ತಾ ಮಾನವ ಜನ್ಮ ಎಂದರೆ ಸಮಾಜಕ್ಕೆ ತಮ್ಮನ್ನು ತಾವು ಅರ್ಪಿಸಿಕೊಳ್ಳುವುದಾಗಿದೆ ಅಂತಹ ಸುದೈವವನ್ನು ನಿಮ್ಮ ನಿಮ್ಮ ಕ್ಷೇತ್ರದ ಮತದಾರ ಬಾಂಧವರು ನಿಮಗೆ ಕರುಣಿಸಿ ಗ್ರಾ.ಪಂ ಸದಸ್ಯರನ್ನಾಗಿಸಿದ್ದಾರೆ ತಾವು ಒಳ್ಳೆಯ ಕಾರ್ಯಗಳ ಮೂಲಕ ಅವರ ವಿಶ್ವಾಸ ಉಳಿಸಿಕೊಳ್ಳಿ ಎಂದು ಆಶೀರ್ವದಿಸಿದರು.

ನಂತರ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಮಾತನಾಡಿದ ಅಥಣಿ ಪೋಲಿಸ್ ಠಾಣೆ ಪಿಎಸ್ಐ ಕುಮಾರ ಹಾಡಕರ ಅವರು ಮಾತನಾಡುತ್ತಾ ಇಂದು ಪ್ರತಿಯೊಂದು ರಂಗದಲ್ಲಿಯೂ ಮಹಿಳೆಯು ಮುನ್ನುಗ್ಗಿ ಯಶಸ್ವಿಯಾಗುತ್ತಿದ್ದರೆಂದರೆ ಅದಕ್ಕೆ ಮುಖ್ಯ ಕಾರಣ ಸಾವಿತ್ರಿಬಾಯಿ ಫುಲೆ ಅವರು ಅವರು ಆವತ್ತಿನ ಕಾಲದಲ್ಲಿ ತಮ್ಮ ಸಂಪೂರ್ಣ ಜೀವನವನ್ನು ಮಹೀಳೆಯರ ಶಿಕ್ಷಣಕ್ಕಾಗಿ ಅರ್ಪಿಸದಿದ್ದರೆ ಇವತ್ತು ಮಹಿಳೆಯರಿಗೆ ಈ ಸ್ಥಾನಮಾನ ಸಿಗುತ್ತಿರಲಿಲ್ಲ ಅದಾಕ್ಕಾಗಿ ಎಲ್ಲ ಹೆಣ್ಣುಮಕ್ಕಳು ಅವರನ್ನು ನೆನೆಯುವಂತಾಗಲಿ ಎಂದು ಹೇಳಿದರು.

ಅನಂತರ ಮಾತನಾಡಿದ ಹಿರಿಯ ಮುಖಂಡ ಅರುಣ ಯಲಗುದ್ರಿ ಅವರು ಮನೆಯೇ ಮೊದಲ ಪಾಠಶಾಲೆ ತಾಯಿಯೇ ಮೊದಲ ಗುರು ಅಂತಹ ತಾಯಿಗೆ ಅಕ್ಷಕ ಅಭ್ಯಾಸವನ್ನು ಮಾಡಲು ಅನುಕೂಲ ಹಾಗೂ ಅವಕಾಶವನ್ನು ಸಾವಿತ್ರಿಬಾಯಿ ಫುಲೆ ಅವರು ಕೊಡಿಸಿದರು ಅವರ ತ್ಯಾಗದ ಪ್ರತಿಫಲವಾಗಿ ಎಲ್ಲ ರಂಗದಲ್ಲಿ ಮಹಿಳೆ ಮುನ್ನುಗ್ಗುತ್ತಿದ್ದಾರೆ ಎಂದು ಹೇಳಿದರು.

ಅನಂತರದಲ್ಲಿ ಮತ್ತೋರ್ವ ಅತಿಥಿಗಳಾದ ಪ್ರವೀಣ ಹುಣಶೀಕಟ್ಟಿ ಹಾಗೂ ಕಾರ್ಯಕ್ರಮದ ಆಯೋಜಕ ಪರಶುರಾಮ ಸೋನಕರ ಅವರು ಮಾತನಾಡಿದರು, ನಾಗಪ್ಪಾ ಉಗಾರೆ ಅವರು ಪ್ರಾಸ್ಥಾವಿಕ ನುಡು ಹೇಳಿದರು. ಈ ವೇಳೆ ಸ್ಥಳೀಯ ಗ್ರಾ.ಪಂ ಚುನಾವಣೆಯಲ್ಲಿ ಆಯ್ಕೆಯಾದ ನೂತನವಾಗಿ ಆಯ್ಕೆಯಾದ ಸದಸ್ಯರಾದ ಜಯಶ್ರೀ ಆಲಬಾಳ, ಜಗದೀಶ ಕಿವಡಿ, ರಾಜೇಶ್ವರಿ ವಣಜೋಳಿ, ಅಪ್ಪಾಸಾಬ ಕೋರಿಶೆಟ್ಟಿ, ರೂಪಾ ಸೋನಕರ, ಹಣಮಂತ ಭಜಂತ್ರಿ, ಸವಿತಾ ಖಲಾಟೆ, ಪ್ರಭಾಕರ ಚಮಕೇರಿ, ಸಂತೋಷ ಕಕಮರಿ, ಗೀತಾ ಬೆಳ್ಳಂಕಿ, ಮಹಾಂತೇಶ ಶಿಂದೂರ, ರೇಣುಕಾ ಬಕಾರಿ, ಜಯಶ್ರೀ ಆಲಬಾಳ, ಸುಧಾ ದಿವಾನಮಳ, ಆಕಾಶ ಬುಟಾಳಿ, ರೇಣುಕಾ ಲಗಳಿ, ಮಹಾಂತೇಶ ಕೋರೆ ಅವರಿಗೆ ಸನ್ಮಾನವನ್ನು ನೆರವೇರಿಸಿದರು.

ಈ ಕಾರ್ಯಕ್ರಮದಲ್ಲಿ ವಸಂತ ಭಜಂತ್ರಿ, ಸಿದರಾಯ ಭಜಂತ್ರಿ, ಸಂತೋಷ ಬಡಕಂಬಿ, ಮಲ್ಲಿನಾಥ ಪ್ಯಾಟಿ, ಶಿವಾನಂದ ಸೋನಕರ, ರವಿ ಬಡಕಂಬಿ, ಎಮ್ ಆರ್ ಖಲೀಫಾ, ಸದಾಶಿವ ಲಗಳಿ, ರಮೇಶ ಮಾಳಿ, ಶಂಕರ ಕಾವೇರಿ, ಸದಾಶಿವ ತಳವಾರ, ಬಸವರಾಜ ಹಳ್ಳದಮಳ, ಗಿರೀಶ ದಿವಾನಮಳ, ಅನೀಲ ತೆವರಟ್ಟಿ, ನಾಗಪ್ಪಾ ಉಗಾರೆ, ಶ್ರೀಶೈಲ ಬಡಕಂಬಿ, ಶ್ರೀಕಾಂತ ಬಡಕಂಬಿ, ನಾಗರಾಜ ತೆವರಟ್ಟಿ, ಮಹಾಂತೇಶ ಮಾಳಿ, ಮಹಾದೇವ ಚಮಕೇರಿ ಸೇರಿದಂತೆ ಇತರರು ಉಪಸ್ಥಿತರಿದ್ದರು.

ಪೊಟೊ ಶೀರ್ಷಿಕೆ- ಪಿಎಸ್ಐ ಕುಮಾರ ಹಾಡಕರ, ಅರುಣ ಯಲಗುದ್ರಿ, ಪ್ರವೀಣ ಹುನಶೀಕಟ್ಟಿ ಅವರನ್ನು ಸನ್ಮಾನಿಸುತ್ತಿರುವ ಶ್ರೀ ಮರುಳಸಿದ್ದ ಮಹಾಸ್ವಾಮಿ, ಪರಶುರಾಮ ಸೋನಕರ (೦೫ಅಥಣಿ-೦೧).

ಪೊಟೊ ಶೀರ್ಷಿಕೆ- ಶ್ರೀಮತಿ ಸಾವಿತ್ರಿಬಾಯಿ ಫುಲೆ ಜಯಂತ್ಯೋತ್ಸವ ಹಾಗೂ ನೂತನ ಗ್ರಾ.ಪಂ ಸದಸ್ಯರಿಗೆ ಸನ್ಮಾನ ಕಾರ್ಯಕ್ರಮ ಹಮ್ಮಿಕೊಂಡ ಗ್ರಾ.ಪಂ ಸದಸ್ಯ ಪರಶುರಾಮ ಸೋನಕರ ಅವರನ್ನು ಸನ್ಮಾನಿಸಿದ ಗಣ್ಯರು(೦೫ಅಥಣಿ-೦೧ಎ).

ಉದ್ಯೋಗ ಲಭ್ಯವಿದೆ | ಉಚಿತ ವಸತಿ ಮತ್ತು ಊಟ | ಸೀಮಿತ ಸೀಟುಗಳು ಮಾತ್ರ ಲಭ್ಯವಿದೆ | ತಕ್ಷಣವಾಗಿ ಅರ್ಜಿಯನ್ನು ಹಾಕಿ | Jobs available | With free accommodations and meals | Only limited seats available | Apply immediately |

 

About Author