day, 00 month 0000
00:00:00
ಅವಿನ್ ಟಿವಿ ಕೆಂಬತ್ ಮಕ್ಕಿ ( ಕೆಂಬತ್ಮಕ್ಕಿ ) ಮನೋಜ್ ಸಾರಥ್ಯದಲ್ಲಿ Avin Tv In the Leadership Of Kembathmakki Manoj ಅಭಿವೃದ್ದಿಪಡಿಸಬೇಕು ಎಂದು ಮುಖಂಡ ಸಂತೋಷ ಬಡಕಂಬಿ ಅವರು ಒತ್ತಾಯಿಸಿದರು. #avintvcom – AVIN TV

लाइव कैलेंडर

April 2024
M T W T F S S
1234567
891011121314
15161718192021
22232425262728
2930  

AVIN TV

Latest Online Breaking News

ಅಭಿವೃದ್ದಿಪಡಿಸಬೇಕು ಎಂದು ಮುಖಂಡ ಸಂತೋಷ ಬಡಕಂಬಿ ಅವರು ಒತ್ತಾಯಿಸಿದರು. #avintvcom

Featured Video Play Icon
post Hospital Stroke care center www.nisargacare.com rehab bedridden care home Nursing Service , Nisarga care Healthcare Rehabilitation Center | Health Care Unit | Pre & Post Operative Care | Home Nursing | Geriatric Care , www.nisargacare.com NISARGA CARE Stroke & Paralysis Rehabilitation Hospital Nisarga Rehab - Centre For Neurological Rehabilitation mentally retarded neuro and Stroke Rehabilitation in Bangalore Best Rehab care www.nisargacare.com http://www.nisargacare.com , http://www.navachaithanyaoldagehome.com , http://www.avintv.com/9211/

ಮಾಳಿ/ಮಾಲಗಾರ ಸಮಾಜಕ್ಕೆ ನಿಗಮ ಮಂಡಳಿ ರಚಿಸಿ – ಸಂತೋಷ ಬಡಕಂಬಿ.

ಅಥಣಿ- ಮೂಲತಃ ಕೃಷಿ ಹಾಗೂ ಹೊಲದಲ್ಲಿ ಬೆಳೆದ ಕಾಯಿಪಲ್ಲೆ ಮಾರಾಟ ಮಾಡುತ್ತಾ ಇಡೀ ಸಮಾಜಕ್ಕೆ ತಮ್ಮದೇಯಾದ ಸೇವೆಯನ್ನು ಮಾಡುತ್ತ ಬಂದಿರುವ ಮಾಳಿ/ಮಾಲಗಾರ ಸಮಾಜ ತೀರಾ ಹಿಂದುಳಿದಿದ್ದು ಸರಕಾರ ನಿಗಮ ಮಂಡಳಿ ರಚನೆ ಮಾಡಿ ಮಾಳಿ ಅಭಿವೃದ್ದಿಪಡಿಸಬೇಕು ಎಂದು ಮುಖಂಡ ಸಂತೋಷ ಬಡಕಂಬಿ ಅವರು ಒತ್ತಾಯಿಸಿದರು.

 

ಅವರು ಸ್ಥಳೀಯ ಶ್ರೀ ರಾಮಲಿಂಗೇಶ್ವರ ದೇವಾಲಯದ ಕಾರ್ಯಾಲಯದಲ್ಲಿ ಹಮ್ಮಿಕೊಂಡ ಸುದ್ದಿಘೋಷ್ಠಿಯನ್ನು ಉದ್ದೇಶಿಸಿ ಮಾತನಾಡುತ್ತಾ ಕರ್ನಾಟಕದಾದ್ಯಂತ ಸುಮಾರು 40 ರಿಂದ 45 ಲಕ್ಷಕ್ಕೂ ಅಧಿಕ ಸಂಖ್ಯೆಯ ಮಾಳಿ/ಮಾಲಗಾರ ಸಮಾಜದವರಿದ್ದು. ಇಂದಿಗೂ ಕೃಷಿಯನ್ನು ಮೂಲಕಸುಬನ್ನಾಗಿ ಆಧರಿಸಿ ಜೀವನ ಸಾಗಿಸುತ್ತಿದ್ದಾರೆ ಇದರಿಂದ ನಾವು ಸಾಮಾಜಿಕವಾಗಿ, ರಾಜಕೀಯವಾಗಿ, ಆರ್ಥಿಕವಾಗಿ, ಶೈಕ್ಷಣಿಕವಾಗಿ ತೀರಾ ಹಿಂದುಳಿದ್ದಿದ್ದೆವೆ, ಈ ಹಿಂದುಳಿದ ನಮ್ಮ ಸಮಾಜಕ್ಕೆ ಸರಕಾರದ ವತಿಯಿಂದ ಪ್ರತ್ಯೇಕ ನಿಗಮ ಮಂಡಳಿಯ ಅವಶ್ಯಕತೆಯಿದೆ ಎಂದರು..

ಮುಂದುವರೆದು ಮಾತನಾಡುತ್ತಾ ದಕ್ಷಿಣ ಕರ್ನಾಟಕಕ್ಕಿಂತ ಉತ್ತರ ಕರ್ನಾಟಕ ಭಾಗದಲ್ಲಿ ಮಾಳಿ/ಮಾಲಗಾರ ಸಮಾಜದ ಜನಸಂಖ್ಯೆಯು ಅತೀ ಹೆಚ್ಚಾಗಿದ್ದು ಅತೀ ಕಡೆಗಣನೆಯಾದ ಸಮಾಜವೂ ಕೂಡ ಆಗಿದೆ ಎಂದರು. ಈ ಎಲ್ಲ ಸಮಸ್ಯೆಗಳನ್ನು ಮುಖ್ಯಮಂತ್ರಿ ಹಾಗೂ ಇತರ ಮಂತ್ರಿಮಂಡಳದ ಸದಸ್ಯರ ಗಮನ ಸೆಳೆಯುವ ಸಲುವಾಗಿ ಬರುವ ಜನೆವರಿ-೦೩ ರಂದು ಆಚರಿಸಲಾಗುವ ಮಾತೆ ಸಾವಿತ್ರಿಬಾಯಿ ಫುಲೆ ಅವರ ಜಯಂತ್ಯೋತ್ಸವದಂದು ಕರ್ನಾಟಕದಾದ್ಯಂತ ಎಲ್ಲ ಗ್ರಾಮ, ತಾಲೂಕು, ಜಿಲ್ಲಾಮಟ್ಟದಲ್ಲಿ ಮುಖ್ಯಮಂತ್ರಿ ಅವರಿಗೆ ನಿಗಮಮಂಡಳಿ ರಚಿಸಿ ಎಂದು ಮನವಿ ಪತ್ರ ಕೊಡಬೇಕು ಹಾಗೂ ಪ್ರತಿ ಕುಟುಂಬದ ಸದಸ್ಯರ ಹೆಸರಿನಿಂದ ನಿಗಮಮಂಡಳಿ ಬೇಕು ಎಂದು ಪತ್ರಬರೆದು ಕಳುಹಿಸುವ ಪತ್ರಚಳುವಳಿಯನ್ನು ಕಡ್ಡಾಯವಾಗಿ ಪ್ರತಿಯೊಬ್ಬ ಮಾಳಿ/ಮಾಲಗಾರ ಸಮಾಜವರು ಆಂದೋಲನ ರೀತಿಯಲ್ಲಿ ಮಾಡಿ ಎಂದು ಕರೆಕೊಟ್ಟರು.

ನಂತರ ಮಾತನಾಡಿದ ಮುಖಂಡ ಶ್ರೀಶೈಲ ಹಳ್ಳದಮಳ ಎಲ್ಲ ರಂಗಗಳಲ್ಲಿ ಕಡೆಗಣಿಸಲ್ಪಟ್ಟ ಮಾಳಿ/ಮಾಲಗಾರ ಸಮಾಜಕ್ಕಾಗಿ ಕರ್ನಾಟಕದಾದ್ಯಂತ ಇರುವ ಎಲ್ಲರು ಮನವಿ ಪತ್ರ ನೀಡುವುದು ಹಾಗೂ ಪತ್ರಚಳುವಳಿ ಆಂದೋಲನದಲ್ಲಿ ಭಾಗವಹಿಸಿ ಎಂದು ತಿಳಿಸಿದರು..

ಈ ವೇಳೆ ಮಹಾಂತೇಶ ಮಾಳಿ, ನಾಗಪ್ಪ ಉಗಾರೆ, ರವಿ ಬಡಕಂಬಿ, ಮಹಾದೇವ ಚಮಕೇರಿ, ಸದಾಶಿವ ಲಗಳಿ, ಪ್ರಶಾಂತ ತೋಡಕರ, ರಮೇಶ ಮಾಳಿ, ಶ್ರೀಶೈಲ ಬಡಕಂಬಿ, ತ್ರಿಮೂರ್ತಿ ಶೇಡಬಾಳ, ಅನೀಲ ತೆವರಟ್ಟಿ, ಶಂಕರ ಬಡಕಂಬಿ, ಬಸವರಾಜ ಹಳ್ಳದಮಳ, ಮುರುಗೇಶ ಮೋಳೆ, ಬಸವರಾಜ ಬಡಕಂಬಿ, ಸಂತೋಷ ಕಿವಡಿ, ಚೇತನ ಮಾಳಿ, ಶ್ರೀಕಾಂತ ಬಡಕಂಬಿ, ಮುರುಗೇಶ ಶೇಡಬಾಳೆ, ಶ್ರೀಶೈಲ ಕಿವಡಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ಪೊಟೊ ಶೀರ್ಷಿಕೆ – ಮಾಳಿ/ಮಾಲಗಾರ ಸಮಾಜಕ್ಕೆ ನಿಗಮ ಮಂಡಳಿ ಬೇಕು ಎಂದು ಒತ್ತಾಯಿಸಿ ನಡೆದ ಸುದ್ದಿಘೋಷ್ಠಿಯಲ್ಲಿ ಪಾಲ್ಗೊಂಡ ಮುಖಂಡರು..

ಉದ್ಯೋಗ ಲಭ್ಯವಿದೆ | ಉಚಿತ ವಸತಿ ಮತ್ತು ಊಟ | ಸೀಮಿತ ಸೀಟುಗಳು ಮಾತ್ರ ಲಭ್ಯವಿದೆ | ತಕ್ಷಣವಾಗಿ ಅರ್ಜಿಯನ್ನು ಹಾಕಿ | Jobs available | With free accommodations and meals | Only limited seats available | Apply immediately |

About Author