day, 00 month 0000
00:00:00
ಅವಿನ್ ಟಿವಿ ಕೆಂಬತ್ ಮಕ್ಕಿ ( ಕೆಂಬತ್ಮಕ್ಕಿ ) ಮನೋಜ್ ಸಾರಥ್ಯದಲ್ಲಿ Avin Tv In the Leadership Of Kembathmakki Manoj ವಿಜಯಪುರ ಜಿಲ್ಲೆ ಕೊಲ್ಹಾರ ತಾಲೂಕು ಸ್ಥಳೀಯ ಪಟ್ಟಣ ಪಂಚಾಯಿತಿ ಎರಡನೇ ಅವಧಿ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಗಳಿಗೆ ಅವಿರೋಧ ಆಯ್ಕೆ ನಡೆಯಿತು – AVIN TV

लाइव कैलेंडर

April 2024
M T W T F S S
1234567
891011121314
15161718192021
22232425262728
2930  

AVIN TV

Latest Online Breaking News

ವಿಜಯಪುರ ಜಿಲ್ಲೆ ಕೊಲ್ಹಾರ ತಾಲೂಕು ಸ್ಥಳೀಯ ಪಟ್ಟಣ ಪಂಚಾಯಿತಿ ಎರಡನೇ ಅವಧಿ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಗಳಿಗೆ ಅವಿರೋಧ ಆಯ್ಕೆ ನಡೆಯಿತು

post Hospital Stroke care center www.nisargacare.com rehab bedridden care home Nursing Service , Nisarga care Healthcare Rehabilitation Center | Health Care Unit | Pre & Post Operative Care | Home Nursing | Geriatric Care , www.nisargacare.com NISARGA CARE Stroke & Paralysis Rehabilitation Hospital Nisarga Rehab - Centre For Neurological Rehabilitation mentally retarded neuro and Stroke Rehabilitation in Bangalore Best Rehab care www.nisargacare.com http://www.nisargacare.com , http://www.navachaithanyaoldagehome.com , http://www.avintv.com/9211/

ಜಯಪುರ ಜಿಲ್ಲೆ ಕೊಲ್ಹಾರ ತಾಲೂಕು ನ್ಯೂಸ್ :-

ಸ್ಲಗ್ :ಸ್ಥಳೀಯ ಪಟ್ಟಣ ಪಂಚಾಯಿತಿ ಎರಡನೇ ಅವಧಿ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಗಳಿಗೆ ಅವಿರೋಧ ಆಯ್ಕೆ ನಡೆಯಿತು

ಆಂಕರ್ :ಕೊಲ್ಹಾರ ಪ.ಪಂ ಅಧ್ಯಕ್ಷ ಹಾಗೂ ಉಪಾಧ್ಯಕ್ಷರಾಗಿ ಆಯ್ಕೆಯಾದ ವಿರೂಪಾಕ್ಷಿ ಕೊಲಕಾರ ಹಾಗೂ ಗೈಬುಸಾಬ್ ಕಂಕರಪೀರ ಅವರನ್ನು ಬಿಜೆಪಿ ಮುಖಂಡ ಎಸ್.ಕೆ.ಬೆಳ್ಳುಬ್ಬಿ ಹಾಗೂ ಸಂಸದ ರಮೇಶ ಜಿಗಜಿಣಗಿ ಸನ್ಮಾನಿಸಿದರು..

ಕೊಲ್ಹಾರ ಪಟ್ಟಣ ಪಂಚಾಯಿತಿಯಲ್ಲಿ ಬಿಜೆಪಿಯ 9, ಕಾಂಗ್ರೆಸ್‌ನ 5 ಹಾಗೂ 3 ಮಂದಿ ಪಕ್ಷೇತರ ಸದಸ್ಯರಿದ್ದಾರೆ. ಇದರಲ್ಲಿ 12 ನೇ ವಾರ್ಡಿನ ಬಿಜೆಪಿ ಸದಸ್ಯ ಸುರೇಶ ಹರಣಶಿಕಾರಿ ಅಕಾಲಿಕ ನಿಧನದಿಂದಾಗಿ ಸದಸ್ಯರ ಸಂಖ್ಯೆ 16 ಕ್ಕೆ ಇಳಿದಿತ್ತು. ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಗಳಿಗೆ ಬಿಜೆಪಿಯಿಂದ ತಲಾ ಒಂದೊಂದು ನಾಮಪತ್ರವನ್ನು ಸಲ್ಲಿಸಲಾಗಿತ್ತು. ಕಾಂಗ್ರೆಸ್ ಸದಸ್ಯರಾದ ಗೈಬುಸಾಬ್ ಕಂಕರಪೀರ, ಮಲ್ಲಿಕಸಾಬ್ ನದಾಫ ಹಾಗೂ ಪಕ್ಷೇತರ ಸದಸ್ಯ ಸಿದ್ದು ಗುಣಕಿ ಬಿಜೆಪಿಗೆ ಬೆಂಬಲ ಸೂಚಿಸಿದರು.

ಬಿಜೆಪಿ ಹಿರಿಯ ಮುಖಂಡ, ಮಾಜಿ ಸಚಿವ ಎಸ್.ಕೆ ಬೆಳ್ಳುಬ್ಬಿ ಅವರ ಸೂಚನೆಯಂತೆ ಬಿಜೆಪಿಗೆ ಬೆಂಬಲ ವ್ಯಕ್ತಪಡಿಸಿದ್ದ ಕಾಂಗ್ರೆಸ್ ಸದಸ್ಯ ಗೈಬುಸಾಬ್ ಕಂಕರಪೀರ್ ಅವರು ಉಪಾಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದರು. ಉಪಾಧ್ಯಕ್ಷ ಸ್ಥಾನಕ್ಕೆ ಬಿಜೆಪಿ ಸಲ್ಲಿಸಿದ್ದ ನಾಮಪತ್ರ ವಾಪಸ್ ಪಡೆಯಲಾಯಿತು.

ಸದಸ್ಯರ ನಡುವಿನ ಹೊಂದಾಣಿಕೆಯಿಂದ ಎರಡು ಸ್ಥಾನಗಳಿಗೆ ಅವಿರೋಧ ಆಯ್ಕೆ ನಡೆಯಿತು. ಚುನಾವಣಾಧಿಕಾರಿಯಾಗಿದ್ದ, ತಹಶಿಲ್ದಾರ್ ಎಂ.ಎ.ಎಸ್ ಬಾಗವಾನ ಫಲಿತಾಂಶ ಘೋಷಿಸಿದರು. ಸಂಸದ ರಮೇಶ ಜಿಗಜಿಣಗಿ  ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ರವಿ ಶಿರಗುಪ್ಪಿ ಚುನಾವಣಾ ಪ್ರಕ್ರಿಯ ವೇಳೆ ಹಾಜರಿದ್ದರು.

ಫಲಿತಾಂಶ ಘೋಷಣೆಯ ನಂತರ ಮಾಜಿ ಸಚಿವ ಎಸ್.ಕೆ. ಬೆಳ್ಳುಬ್ಬಿ ನೇತೃತ್ವದಲ್ಲಿ ಬಿಜೆಪಿ ಕಾರ್ಯಕರ್ತರು ಹಾಗೂ ಬೆಂಬಲಿಗರು ಪಟ್ಟಣದ ಪ್ರಮುಖ ವೃತ್ತಗಳಲ್ಲಿ ಪಟಾಕಿ ಸಿಡಿಸಿ ಸಿಹಿ ಹಂಚಿ ವಿಜಯೋತ್ಸವ ಆಚರಿಸಿದರು. ಮಲ್ಲಿಕಾರ್ಜುನ್ ಬೆಳ್ಳುಬ್ಬಿ, ಚಂದ್ರಶೇಖರ್ ಬೆಳ್ಳುಬ್ಬಿ, ಹುಚ್ಚಪ್ಪ ಬಾಟಿ, ಅಶೋಕ್ ಮುದಕವಿ, ಇಕ್ಬಾಲ್ ತಹಶಿಲ್ದಾರ್, ರಾಜಶೇಖರ್ ಶೀಲವಂತ, ಬಂದೇನವಾಜ್ ಗಿರಗಾಂವಿ, ನೂರ್ ಕಂಕರಪೀರ, ರಿಯಾಜ್ ಕಂಕರಪೀರ, ಇಮಾಮ್ ಮುಲ್ಲಾ, ಮಂಜು ತುಂಬರಮಟ್ಟಿ, ಜಾಕೀರ್ ಸೌದಾಗರ, ಸುಭಾಶ ಭಜಂತ್ರಿ, ದಾದಾ ಕಂಕರಪೀರ, ಬಸವರಾಜ್ ಬೋಜನಾಯಕ, ಶೇಖಪ್ಪ ಗಾಣಿಗೇರ, ಪರಮಪ್ಪ ಬರಗಿ ಇದ್ದರು.

About Author